ಸ್ಪರ್ಧೆಗಳಲ್ಲಿ ಭಾಗವಹಿಸಿ ನೊಂದ ಮನಸ್ಸಿಗೆ ಪ್ರೋತ್ಸಾಹ ತುಂಬಿಕ್ಕೊಂಡ ಹಿರಿಯ ಜೀವಗಳು

ಮಡಿಕೇರಿ :ನಿರಾಶ್ರಿತರಿಗೆ ಆಶ್ರಯ ನೀಡುವ ಸ್ನೇಹ ಜೀವಿ ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗದಿಂದ ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಅವರೊಂದಿಗೆ ಬೆರೆಯುವ ಕಾರ್ಯಕ್ರಮವನ್ನು ಅ 6 ರಂದು ತ್ಯಾಗರಾಜ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಎಲ್ಲರೂ ನಮ್ಮವರು ಎಂಬ ವೇದವಾಕ್ಯದೊಂದಿಗೆ ತ್ಯಾಗರಾಜ ಕಾಲೋನಿಯ ತಾನಲ್ ಆಶ್ರಮದಲ್ಲಿರುವ ಹಿರಿಯರೊಂದಿಗೆ ವಿಭಿನ್ನ ಕಾರ್ಯಕ್ರಮ ಹಮ್ಮಿಕ್ಕೊಂಡು ಗೆಳೆಯರ ಬಳಗ ಕೆಲ ಕಾಲ ಅವರೊಂದಿಗೆ ಬೆರೆತು ಸಂತೋಷವನ್ನು ಹಂಚಿಕ್ಕೊಂಡರು. ಕಾರ್ಯಕ್ರಮದ ಅಂಗವಾಗಿ ಆಶ್ರಮದಲ್ಲಿರುವ ನೊಂದ ಹಿರಿಯರೊಂದಿಗೆ ವಿಭಿನ್ನ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ನೊಂದವರ ಬಾಳಿನ ಆಶಾಕಿರಣದ ಫೈವ್ ಸ್ಟಾರ್ ಸಿಂಗರ್ಸಿನ ಭಾಷಾ, ಶಿವಣ್ಣನವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಗಿತ್ತು

ಕಾರ್ಯಕ್ರಮದಲ್ಲಿ ಅನ್ನದಾನ ಕಾರ್ಯಕ್ರಮ ನಡೆದು ಕೊನೆಯಲ್ಲಿ ಕ್ರೀಡೆಯಲ್ಲಿ ವಿಜೇತರಾದಂತಹ ಪ್ರತಿಯೊಬ್ಬ ನೊಂದ ಹಿರಿಯ ಜೀವಿಗಳಿಗೆ ಬಹುಮಾನ ವಿತರಣೆ ನಡೆಯಿತು.

ಬಳಗದ ಅಧ್ಯಕ್ಷರಾದ ಮೊಹಮ್ಮದ್ ಆಲಿ, ಉಪಾಧ್ಯಕ್ಷರಾದ ಸುಲೈಮಾನ್, ಖಜಾಂಚಿಯಾದ ಶಿವು, ಗಾಯಕಿಯಾದ ಮಮತಾ, ಕಾರ್ಯದರ್ಶಿ ಅಬ್ದುಲ್ ರಜಾಕ್,ಎಂ ಎ ದೀಕ್ಷಿತ್, ನಗರಸಭಾ ಸದಸ್ಯರಾದ ಅಮೀನ್ ಮೋಹಿಸಿನ್, ಬಶೀರ್ ಅಹ್ಮದ್, ಮೇರಿ ವೇಗಸ್,ಲತೀಫ್,ರಜಾಕ್, ತರಕಾರಿ ವ್ಯಾಪಾರಿ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಅಬ್ಸೀನಾ ಹಾಗೂ ಸೆಲಿಕತ್, ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *