ಬರಕಃ ಇಂಟರ್ನ್ಯಾಷನಲ್ ಸ್ಕೂಲ್ & ಕಾಲೇಜಿನಲ್ಲಿ ಇತ್ತೀಚಿಗೆ ಸಂಭ್ರಮದ ಪ್ರೆಪ್ ಗ್ರಾಜುಯೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಕ್ರೈಂ ಬ್ರಾಂಚಿನ ಪೊಲೀಸ್ ಅಧಿಕಾರಿ ರಫೀಕ್ ಕೆ.ಎಂ ಅವರು ಮಕ್ಕಳಿಗೆ ಅರ್ಹತಾ ಪತ್ರಗಳನ್ನು ವಿತರಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಬರಹಗಾರ ಮೊಹಮ್ಮದ ಅಲಿ ಕಮ್ಮರಡಿ , ನುರಿತ ಪತ್ರಕರ್ತ ಆರಿಫ್ ಪಡುಬಿದ್ರಿ, ಸಾಮಾಜಿಕ ಕಾರ್ಯಕರ್ತರಾದ ಅಹ್ಮದ್ ಕುಂಞಿ ಮಾಸ್ಟರ್, ಹಸೈನಾರ್ ಬಾರೆಬೆಟ್ಟು, ಸಿದ್ದಿಕ್ ಶರವು ಸಮಯೋಚಿತವಾಗಿ ಮಾತನಾಡಿದರು. ಬರಕಃ ವಿದ್ಯಾ ಸಂಸ್ಥೆ ಕಳೆದ ದಶಕದಿಂದ ನಡೆಸುತ್ತಿರುವ ಅತ್ಯಂತ ಮೌಲ್ಯಯುತವಾದ ಶೈಕ್ಷಣಿಕ ಸೇವೆಯನ್ನು ಅವರು ಪ್ರಶಂಸಿಸಿದರು . ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ರವರು ಮಾತನಾಡಿ ಈ ಪ್ರದೇಶದ ವಿಧ್ಯಾರ್ಥಿಗಳ ಸರ್ವ ವಿಧ ಪ್ರಗತಿಗೆ ನಮ್ಮ ಸಂಸ್ಥೆ ಸದಾ ಕಟಿಬದ್ಧವಾಗಿ ಸೇವೆಸಲ್ಲಿಸಲಿದೆ ಎಂದು ಹೇಳಿದರು. ಪ್ರಾಂಶುಪಾಲರಾದ ಶರ್ಫುದ್ದೀನ್ ಬಿ.ಯಸ್ ಆರಂಭದಲ್ಲಿ ಸ್ವಾಗತಿಸಿದರು ಮತ್ತು ಇಸ್ಲಾಮಿಕ್ ವಿಭಾಗದ ಪ್ರಾಂಶುಪಾಲರಾದ ಮೊಹಮ್ಮದ್ ಹನೀಫ್ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಕೆಜಿ ವಿದ್ಯಾಥಿಗಳು ಪ್ರದರ್ಶಿಸಿದ ವರ್ಣ ರಂಜಿತ ಸಾಂಸ್ಕೃಕ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು.
ಇದೇ ವೇದಿಕೆಯಲ್ಲಿ ಶಾಲಾ ಮ್ಯಾಗಝಿನ್ ‘ಅನ್ನೂರ್’ ಬಿಡುಗಡೆಗೊಳಿಸಲಾಯಿತು. ಶಾಲೆಯ ಜನರಲ್ ಮ್ಯಾನೇಜರ್ ಶಮೀರ್ ಮತ್ತು ನಿರ್ದೇಶಕರಾದ ಅಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
